ಮೂಡೂತಿಹ ರವಿ ದೂರದ ಬೆಟ್ಟದೆಡೆಯಿಂದ
ಮುಗ್ಧ ನಗುವ ಚೆಲ್ಲಿ..
ಏರುತಿಹ ಮಂತ್ರಿ ಮಹೋದಯ ಕುರ್ಚಿಯನು
ತನ್ನ ಕಪಟ ನಗುವ ಚೆಲ್ಲಿ,
ಮುಗ್ಧ ಜನತೆಯ ರಕ್ತ ಚೆಲ್ಲಿ..!!
ಅಂದು ಗಾಂಧೀಜಿ ಬಯಸಿದ್ದರು
ಕಟ್ಟಲು ರಾಮ ರಾಜ್ಯ..
ಇಂದು ಮಂತ್ರಿ ಮಹೋದಯ ಕಟ್ಟುತ್ತಿದ್ದಾನೆ
ನೂತನ ಭಾರತವ..!!
ತುಂಬಿ ಕಪಟ ಭ್ರಷ್ಟ ತ್ಯಾಜ್ಯ..!!
ಎಂಥಹಾ ದೌರ್ಭಾಗ್ಯ...!!!.
No comments:
Post a Comment